Friday, April 22, 2016

ನೀನೆ ನೀನೆ, ನನಗೆಲ್ಲಾ ನೀನೆ ... ಮಾತು ನೀನೆ ಮನಸೆಲ್ಲಾ ನೀನೆ.... ( ಆಕಾಶ )


ರಾಮಭಂಟ ಹನುಮನು ಲಂಕೇ ಹಾರಿ ಬಂದನು, ಸೀತೆ ಹುಡುಕಿ ಬಿಟ್ಟನು... ಜೈ ಮಾರುತಿ....! ( ಜೈ ಮಾರುತಿ-800 )

ಚಿತ್ರ : ಜೈ ಮಾರುತಿ-800 (2016)
ಸಾಹಿತ್ಯ : ಚೇತನ...
ಗಾಯಕರು : ಪುನೀತ್ ರಾಜಕುಮಾರ್ ಮತ್ತು ಇಂಧೂ ನಾಗರಾಜ್...
------------------------------------------------------------------------
ಎಲ್ಲಿರುವೆ ತಂದೆ ಬಾರೋ | ಹೇ ಮಾರುತಿ....
ಎಲ್ಲಿರುವೆ ತಂದೆ ಬಾರೋ....
ಎಲ್ಲೆಲ್ಲಿ ನೋಡಿದರೂ, ಅಲ್ಲಿ ನಿನ್ನ ಕೀರೂಥಿ,
ಎಲ್ಲಿ ನೋಡಲು ನಿನ್ನ, ಮೂಡಿರುವ ಶ್ರೀ ಪಥಿ....
ಎಲ್ಲಿರುವೆ ತಂದೆ ಬಾರೋ | ಹೇ ಮಾರುತಿ....!

ರಾಮಭಂಟ ಹನುಮನು ಲಂಕೇ ಹಾರಿ ಬಂದನು,
ಸೀತೆ ಹುಡುಕಿ ಬಿಟ್ಟನು... ಜೈ ಮಾರುತಿ....!
ರಾವಣನ್ನ ಎದುರಿಸಿ ರಾಜ್ಯವನ್ನೇ ಸುಟ್ಟನು,
ವೈರಿಗಳ ಕೊಂದನು.... ಜೈ ಮಾರುತಿ....!
ಗೆದ್ದ ಗೆದ್ದ ಇವ, ಶ್ರೀರಾಮ ಮನಸ ಗೆದ್ದನು.....
ಬಂದ ಬಂದ ಇವ, ಪುಟ್ಟ ಬೆಟ್ಟ ಹಿಡಿದು ಬಂದನು...
ಬಂದ ಬಂದ ನೋಡು, ಭಂಟ ಬಂದ ನೋಡು,
ಭೋಲೋ ಜೈಜೈಜೈ ಜೈ ಹನುಮ.....
ಎದೆಯ ಸೀಳಿ ನಿಂತನೋಡು, ರಾಮ ಭಂಟ ಮಾರುತಿ....
ಎತ್ತಿರಪ್ಪ ಎತ್ತಿರಪ್ಪ, ಎದೆಯ ತುಂಬಿ ಆರತಿ....

ರಾಮಭಂಟ ಹನುಮನು ಲಂಕೇ ಹಾರಿ ಬಂದನು,
ಸೀತೆ ಹುಡುಕಿ ಬಿಟ್ಟನು... ಜೈ ಮಾರುತಿ....!
ಎಲ್ಲಿರುವೆ ತಂದೆ ಬಾರೋ.... ಎಲ್ಲಿರುವೆ ತಂದೆ ಬಾರೋ....
ಅಲ್ಲಿ ರಘುನಂದನಗೆ ಬಂಧಿಸುತ ನಿನ್ನೇದೆಯ,
ಕಂಡು ಕೊಂಡಾಡಿ, ಗೆಲ್ಲೋ ನೀ ಮಾರುತಿ...! 
ಎಲ್ಲಿರುವೆ ತಂದೆ ಬಾರೋ....

ರಾಮ ನಾಮವನು ತನ್ನ ಶಕ್ತಿ ಎಂದನೋ....
ಈ ಹನುಮನ, ಎದೆಯಲ್ಲಿಯೇ, ಶ್ರೀರಾಮನ ದಿಗ್ದರ್ಶನ.....
ಪರಮ ಭಕ್ತನೆಂದು ವಾಲ್ಮೀಕಿ ಬರೆದನೋ....
ಹನುಮ ಹನುಮ ವೀರ ಹನುಮನೇ....!
ಶ್ರೀ ರಾಮ ಇರುವಲ್ಲೇ ಇರುತಾನೆ ಹನುಮ.....
ಶ್ರೀ ಹನುಮ ಇರುವಲ್ಲೇ ಇರುತಾನೆ ರಾಮ.....
ಹೇ ಕಷ್ಟ ಕಷ್ಟ, ಕಷ್ಟ ನಷ್ಟ ಎಲ್ಲ ಕಳೆಯುವ !
ಹೇ ದುಷ್ಟ ದುಷ್ಟ, ಕೂಡ ದುಷ್ಟ ಶಕ್ತಿ ಕಳೆಯುವ....!
ಬಂದ ಬಂದ ನೋಡು, ಭಂಟ ಬಂದ ನೋಡು,
ಭೋಲೋ ಜೈಜೈಜೈ ಜೈ ಹನುಮ.....
ಗದೆಯ ಹಿಡಿದು ಬಂದ ನೋಡು, ರಾಮಧೂತ ಮಾರುತಿ....
ಎತ್ತಿರಪ್ಪ ಎತ್ತಿರಪ್ಪ, ಎದೆಯ ತುಂಬಿ ಆರತಿ....

ಎಲ್ಲಿರುವೆ ತಂದೆ ಬಾರೋ.... ಎಲ್ಲಿರುವೆ ತಂದೆ ಬಾರೋ....

ವಾಯುಪುತ್ರನಿನವನು ವಜ್ರಕಾಯವಂತನು.....
ಆ ರಾವಣ, ಕುಂಭಕರ್ಣನ, ಕಡು ದರ್ಪವ ಕಳೆದೊನಿವ....
ಭೀಮನಿಗೆ ತನ್ನ ಶಕ್ತಿ ತಿಳಿಸಿಕೊಟ್ಟನೋ.....
ಹನುಮ ಹನುಮ ವೀರ ಹನುಮನೇ....!
ಧರ್ಮನ ಉಳಿಸೋಕೆ ಬಂದಾ ಆ ರಾಮ.....
ರಾಮಾನಾ ಕಾಯೋಕೆ ಬಂದ ಈ ಹನುಮ....
ಹೇ ಬಾರೋ ಬಾರೋ, ಎಲ್ಲ ಭಯವ ದೂರ ಮಾಡಲು....
ಹೇ ಸೇರೋ ಸೇರೋ, ನಮ್ಮ ಮನೆಗೆ ರಕ್ಷೇ ನೀಡಲು....
ಬಂದ ಬಂದ ನೋಡು, ಭಂಟ ಬಂದ ನೋಡು,
ಭೋಲೋ ಜೈಜೈಜೈ ಜೈ ಹನುಮ.....
ಭೂಮಿಗೆಂದು ಒಬ್ಬ ರಾಮ ಒಬ್ಬ ಧೂತ ಮಾರುತಿ.....
ಸೂರ್ಯ ಚಂದ್ರ ದಿನವು ಬೆಳಗಿ ಹಾಡುತಾರೆ ಕೀರೂಥಿ....

ರಾಮಭಂಟ ಹನುಮನು ಲಂಕೇ ಹಾರಿ ಬಂದನು,
ಸೀತೆ ಹುಡುಕಿ ಬಿಟ್ಟನು... ಜೈ ಮಾರುತಿ....!
ಎಲ್ಲಿರುವೆ ತಂದೆ ಬಾರೋ | ಹೇ ಮಾರುತಿ....
ಎಲ್ಲಿರುವೆ ತಂದೆ ಬಾರೋ....
ಅಲ್ಲಿ ರಘುನಂದನಗೆ ಬಂಧಿಸುತ ನಿನ್ನೇದೆಯ,
ಕಂಡು ಕೊಂಡಾಡಿ, ಗೆಲ್ಲೋ ನೀ ಮಾರುತಿ...! 
ಎಲ್ಲಿರುವೆ ತಂದೆ ಬಾರೋ....

ಜೈ ಮಾರುತಿ.......   ಜೈ ಮಾರುತಿ.......

Wednesday, April 13, 2016

ಕನಸುಗಾರನ ಒಂದು ಕನಸು ಕೇಳಮ್ಮ... ಕನಸುಗಾರನ ಒಂದು ಕವನ ಕೇಳಮ್ಮ... (ಓ ನನ್ನ ನಲ್ಲೆ)


ಚಿತ್ರ: ಓ ನನ್ನ ನಲ್ಲೆ ( 2000 )
ಸಾಹಿತ್ಯ: ವಿ.ರವಿಚಂದ್ರನ್
ಗಾಯಕರು : ಡಾ || ಎಸ್.ಪಿ.ಬಾಲಸುಬ್ರಮಣ್ಯಂ...
-----------------------------------------------

ಕನಸುಗಾರನ ಒಂದು ಕನಸು ಕೇಳಮ್ಮ...
ಕನಸುಗಾರನ ಒಂದು ಕವನ ಕೇಳಮ್ಮ...
ಈ ನನ್ನ ಕವನವ, ಕೇಳಲು ಆ ಚಂದ್ರನು,
ಕೆಳಗಿಳಿದು ಬಂದನು, ಮೇಲ್ಹೋಗಲು ಮರೆತನು...
ಈ ಕವನಕೆ, ಆ ಚಂದಿರ,
ಬಿಳಿಹಾಳೆಯಾಗಿ ಕವಿಯ ಮನಸು ತುಂಬಿದನು....

ಕನಸುಗಾರನ ಒಂದು ಕನಸು ಕೇಳಮ್ಮ...
ಕನಸುಗಾರನ ಒಂದು ಕವನ ಕೇಳಮ್ಮ...

ಹೂವೊಂದು ಕೇಳಿತಮ್ಮ, ನಾನಿಲ್ಲದಿದ್ದರೇನು?
ನೀನಿಲ್ಲದಿದ್ದರೆ, ನಗುವೆ ಇಲ್ಲಮ್ಮ..
ಹೂವೇ ಇಲ್ಲದ ಲೋಕ ನಮಗೇಕಮ್ಮ..?
ನಗುವೇ ಇಲ್ಲದ ಲೋಕ ನಮಗೇಕಮ್ಮ...?
ಈ ಲೋಕದ ಶೃಂಗಾರವೇ, ನೀನೇ ಹೂವಮ್ಮ...
ಈ ಲೋಕಕೆ ವೈಯ್ಯಾರವೇ, ನೀನೇ ಹೂವಮ್ಮ..
ಈ ಕವನ ಕೇಳಿ ಆ ಚಂದ್ರ ಕರಗಿದನು...

ಕನಸುಗಾರನ ಒಂದು ಕನಸು ಕೇಳಮ್ಮ...
ಕನಸುಗಾರನ ಒಂದು ಕವನ ಕೇಳಮ್ಮ....

ಕನಸಿಗೆ ಇಲ್ಲ ಬೇಲಿ, ಅದು ಬರುವುದು ತೇಲಿ...
ಈ ಮನಸಿನ ಆಸೆ, ಕನಸಾಗಿ ಬರುವುದಮ್ಮ...
ನಾಳೆ ಅನ್ನುವುದೆ, ಈ ಕನಸು ಕೇಳಮ್ಮ...
ಕನಸು ಇಲ್ಲದ ಬಾಳು ನಮಗೇಕಮ್ಮ?
ಬೆಳಕೇ ಇಲ್ಲದ ದಾರಿಯಲಿ ನಾನು ನಡೆಯ ಬಲ್ಲೆ...
ಕನಸೇ ಇಲ್ಲದ ದಾರಿಯಲಿ ನಾ ಹೇಗೆ ನಡೆಯಲಿ..?
ಈ ನನ್ನ ಹಾಡೆ ನನ್ನ ಕನಸು ಕೇಳಮ್ಮ....

ಕನಸುಗಾರನ ಒಂದು ಕನಸು ಕೇಳಮ್ಮ....
ಕನಸುಗಾರನ ಒಂದು ಕವನ ಕೇಳಮ್ಮ...
ಈ ನನ್ನ ಕವನವ, ಕೇಳಲು ಆ ಚಂದ್ರನು...
ಕೆಳಗಿಳಿದು ಬಂದನು, ಮೇಲ್ಹೋಗಲು ಮರೆತನು...
ಈ ಕವನಕೆ, ಆ ಚಂದಿರ, 
ಬಿಳಿಹಾಳೆಯಾಗಿ ಕವಿಯ ಮನಸು ತುಂಬಿದನು...

ಕನಸುಗಾರನ ಒಂದು ಕನಸು ಕೇಳಮ್ಮ...
ಕನಸುಗಾರನ ಒಂದು ಕವನ ಕೇಳಮ್ಮ....

ಮನದಲ್ಲಿ ಆಸೆಯೆ ಬೇರೆ , ಬದುಕಲ್ಲಿ ನಡೆವುದೇ ಬೇರೆ .... ( ಮೋಡದ ಮರೆಯಲಿ )


Monday, April 11, 2016

ಭುವನಂ ಗಗನಂ... ಸಕಲಂ ಶರಣಂ... ಅಖಿಲಂ ನಿಖಿಲಂ... ಶಿವನೇ ಶರಣಂ.... (ವಂಶಿ)


ಚಿತ್ರ :  ವಂಶಿ ( 2008 )
ಗಾಯಕರು : ಸೋಹ್ಂ ಚಕ್ರವರ್ತಿ...
ಸಾಹಿತ್ಯ್ : ವಿ.ನಾಗೇಂದ್ರ ಪ್ರಸಾದ...
-------------------------------------------------
ಭುವನಂ ಗಗನಂ... ಸಕಲಂ ಶರಣಂ...
ಅಖಿಲಂ ನಿಖಿಲಂ... ಶಿವನೇ ಶರಣಂ....
ಉಸಿರನು ಕಾಯಲೂ, ಹಸಿರನು ನೀಡಿದ...
ಇರುಳನು ನೀಗಲೂ, ಹಗಲನು ನೀಡಿದ...
ಶರಣು ಎನಲು, ಇವನು ಒಲಿದು ಬರುವ....
ಎದುರು ನಿಲ್ಲಲು, ಇವನು ಮುನಿದೇ ಬಿಡುವ....

ಭುವನಂ ಗಗನಂ .... ಸಕಲಂ ಶರಣಂ...
ಅಖಿಲಂ ನಿಖಿಲಂ... ಶಿವನೇ ಶರಣಂ....

ತಾಯಿಗೆ ಮಗನೆ ಜೀವ, ಆ ಮಗನಿಗೆ ತಾಯೆ ದೈವ...
ಇಲ್ಲಿ ತ್ಯಾಗ ಪ್ರೀತಿಯ ಕರುಳಿನ ಬಂಧ ನೋಡು....
ಜಗದಾ ಬಾರಿ ಸಾಗರವ, ಜಿಗಿದು ಈಜಿ ಮೀರಿಸುವ...
ಪ್ರಬಲ ಧೈರ್ಯ ನೀಡಿರುವ ಶಿವನೇ...ಏ...

ಭುವನಂ ಗಗನಂ... ಸಕಲಂ ಶರಣಂ...
ಅಖಿಲಂ ನಿಖಿಲಂ... ಶಿವನೇ ಶರಣಂ....

ಕಾಲ ಓಡುತಿದೆ ಬೇಗ, ಸರಿಯಾಗಿ ಬಾಳುವುದೇ ಯೋಗ...
ಜನಕಾಗಿ ಬಾಳುವ ಸೇವಕ ನಾನು ಈಗ...
ಶಿವನು ಮೇಲೆ ನೋಡಿರುವ, ಜನರು ಮಾಡೋ ಕಾಯಕವ....
ನಿಜದ ಅಂಕೆ ನೀಡಿರುವ ತಿಳಿಯೋ...

ಭುವನಂ ಗಗನಂ... ಸಕಲಂ ಶರಣಂ...
ಅಖಿಲಂ ನಿಖಿಲಂ... ಶಿವನೇ ಶರಣಂ....
ಉಸಿರನು ಕಾಯಲೂ, ಹಸಿರನು ನೀಡಿದ...
ಇರುಳನು ನೀಗಲೂ, ಹಗಲನು ನೀಡಿದ...
ಶರಣು ಎನಲು, ಇವನು ಒಲಿದು ಬರುವ....
ಎದುರು ನಿಲ್ಲಲು, ಇವನು ಮುನಿದೇ ಬಿಡುವ....

ಭುವನಂ ಗಗನಂ... ಸಕಲಂ ಶರಣಂ...
ಅಖಿಲಂ ನಿಖಿಲಂ... ಶಿವನೇ ಶರಣಂ....


ಬರೆದೆ ನೀನು ನಿನ್ನ ಹೆಸರ, ನನ್ನ ಬಾಳ ಪುಟದಲಿ .... (ಸೀತಾ )


ತಬ್ಬಲಿಗೆ ಈ ತಬ್ಬಲಿಯ, ತವರಿದೆ ಯಾಕ ಅಳುವೆಯೇ....? ( ಕರ್ಪೂರದ ಗೊಂಬೆ )

ಚಿತ್ರ : ಕರ್ಪೂರದ ಗೊಂಬೆ (1996)
ಸಾಹಿತ್ಯ : ನಾದಬ್ರಹ್ಮ" ಹಂಸಲೇಖ"...
ಗಾಯಕರು : ಕೆ.ಎಸ್.ಚಿತ್ರಾ...
--------------------------------------
ಆ....ಆ.....ಆ.....ಆ...
ತಬ್ಬಲಿಗೆ ಈ ತಬ್ಬಲಿಯ, 
ತವರಿದೆ ಯಾಕ ಅಳುವೆಯೇ....?
ಆ....ಆ.....ಆ.....ಆ...
ತಬ್ಬಲಿಗೆ ಈ ತಬ್ಬಲಿಯ, 
ನಗುವಿದೆ ಯಾಕ ಅಳುವೆಯೇ....?
ಆ....ಆ.....ಆ.....ಆ...
ತಬ್ಬಲಿಗೆ ಈ ತಬ್ಬಲಿಯ, 
ತವರಿದೆ ಯಾಕ ಅಳುವೆಯೇ....?

ನನ್ನಯಾ, ಪ್ರೀತಿಯಾ, ಹಕ್ಕಿ ಮನ ಒಲಿಸಿದೆ | 
ದೂರ ದೂರ ಕಳಿಸಿದೆ...
ನಿನ್ನಯಾ, ಪ್ರೀತಿಯಾ, ಹಕ್ಕಿಗೆ ಸುದ್ಧಿ ತಲುಪಿಸಿ | 
ತರೋ ಹೊರೆ ಹೊರಿಸಿದೆ...
ಹಗಲು ಕಳಿಸಿರುವೇ, ನಾ ಇರುಳ ಒಳಗಿರುವೆ....
ಬೆಳಕು ಬರೊವರೆಗೂ, ನಾ ನಿನ್ನ ಜೊತೆಯಿರುವೆ...
ತಬ್ಬಲಿಗೆ ಈ ತಬ್ಬಲಿಯ, 
ತವರಿದೆ ಯಾಕ ಅಳುವೆಯೇ....?
ಆ....ಆ.....ಆ.....ಆ...
ತಬ್ಬಲಿಗೆ ಈ ತಬ್ಬಲಿಯ, 
ನಗುವಿದೆ ಯಾಕ ಅಳುವೆಯೇ....?

ಏನಿದೆ, ಇನ್ನೇನಿದೆ, ನಿನ್ನ ಬಿಟ್ಟು ಏನಿದೇ | 
ನೀನೇ ಬದುಕಾಗಿದೆ...
ಕರುಳಿನಾ, ಗೆಳತಿಯೇ, ತಾಯಿಲ್ಲದ ತವರಿಗೆ | 
ಅಕ್ಕಾ ತಾನೇ ದೀವಿಗೆ...
ಕಣ್ಣು ನೀನಮ್ಮಾ , ರೆಪ್ಪೇ ನಾನಮ್ಮಾ... 
ನಿನ್ನ ಕಣ್ಣೋರೆಸೋ, ತಾಯಿ ನಾನಮ್ಮಾ...
ತಬ್ಬಲಿಗೆ ಈ ತಬ್ಬಲಿಯ, 
ನಗುವಿದೆ ಯಾಕ ಅಳುವೆಯೇ....?
ಆ....ಆ.....ಆ.....ಆ...
ತಬ್ಬಲಿಗೆ ಈ ತಬ್ಬಲಿಯ, 
ನಗುವಿದೆ ಯಾಕ ಅಳುವೆಯೇ....?
ಜೋ ಜೋ ಜೋ...ಲಾಲಿ... ಜೋ ಜೋ ಜೋ....
ಜೋ ಜೋ ಜೋ...ಲಾಲಿ... ಜೋ ಜೋ ಜೋ....

ಸಾವಿನಾ, ಸೆರಗಲಿ, ಎಲ್ಲೋ ಒಂದು ಎಳೆಯಿದೆ | 
ಬಾಳು ಎಂದು ಸೆಳೆದಿದೆ...
ಭೂಮಿಗೂ, ಬಾಳಿಗೂ, ಅಗೋಚರ ನಂಟಿದೆ | 
ತುಂಡಾದರೂ ಅಂಟಿದೆ...
ಸಾವೇ ನಿಜವಿಲ್ಲಿ, ಗುಟ್ಟೇನು ಬಂತಿಲ್ಲಿ....
ನಾವು ನೆಪವಿಲ್ಲಿ, ರಟ್ಟಾಯಿತೋ ಇಲ್ಲಿ....

ತಬ್ಬಲಿಗೆ ಈ ತಬ್ಬಲಿಯ, 
ತವರಿದೆ ಯಾಕ ಅಳುವೆಯೇ....?
ಆ....ಆ.....ಆ.....ಆ...
ತಬ್ಬಲಿಗೆ ಈ ತಬ್ಬಲಿಯ, 
ನಗುವಿದೆ ಯಾಕ ಅಳುವೆಯೇ....?
ಜೋ ಜೋ ಜೋ...ಲಾಲಿ... ಜೋ ಜೋ ಜೋ....
ಜೋ ಜೋ ಜೋ...ಲಾಲಿ... ಜೋ ಜೋ ಜೋ....

ಎಲ್ಲೆಲ್ಲೆಲ್ಲು ಹಬ್ಬ ಹಬ್ಬ , ಬಂತು ಯುಗಾದಿ ಹಬ್ಬ ...( ರಿಷಿ )


ಯುಗ ಯುಗಾದಿ ಕಳೆದರೂ , ಯುಗಾದಿ ಮರಳಿ ಬರುತಿದೆ .... ( ಕುಲವಧು )


ಮಂದಾರ ಮಂದಾರ, ಮಂದಾರವೋ ..... ( ಅಂತೂ ಇಂತೂ ಪ್ರೀತಿ ಬಂತು )


ಪ್ರೀತಿಮಾಡು ತಪ್ಪೇನಿಲ್ಲಾ, ಅಂತ ಎಲ್ಲ ಹೇಳ್ತಾರಲ್ಲಾ .... ( ಹಳ್ಳಿ ಮೇಷ್ಟ್ರು )