ಚಿತ್ರ : ಚೆಲ್ಲಿದ ರಕ್ತ (1982)
ಸಾಹಿತ್ಯ : "ಸಾಹಿತ್ಯ ರತ್ನ" ಚಿ||ಉದಯಶಂಕರ್...
ಗಾಯಕರು : ಡಾ|| ಎಸ್.ಪಿ.ಬಾಲಸುಬ್ರಹ್ಮಣ್ಯಂ...
ಶಿವನೊಲಿದರೆ ಭಯವಿಲ್ಲಾ....ಆ...
ಶಿವ ಮುನಿದರೆ ಬದುಕಿಲ್ಲಾ...ಆ...
ಶಿವನಲ್ಲದೆ, ಹರನಲ್ಲದೇ, ಗತಿ ಯಾರೂ, ನಮಗಿಲ್ಲಾ....
ಜಡೆಯಲ್ಲೆ ಕಟ್ಟಿದ ನದಿಯಾ | ತಲೆಯಲ್ಲೆ ಮುಡಿದಾ ಶಶಿಯಾ,
ಕಣ್ಣೊಳಗೆ ಉರಿವಾ ಬೆಂಕಿಯಾ | ಮುಚ್ಚಿಟ್ಟುಕೊಂಡು,
ನಗುವಾ ನಮ್ಮ ಶಿವನಾ ಕಂಡೆಯಾ | ಅಮ್ಮಮ್ಮಾ ಅವನ,
ಮಹಿಮೆಯನು ನೀನು ಬಲ್ಲೇಯಾ.... (ಪ)
ಪಟ್ಟೆ ಪಿತಾಂಬರವಿಲ್ಲ, ಬಂಗಾರದ ಒಡವೆಗಳಿಲ್ಲ..ಆ...ಆ...
ಪಟ್ಟೆ ಪಿತಾಂಬರವಿಲ್ಲ, ಬಂಗಾರದ ಒಡವೆಗಳಿಲ್ಲ....
ಬೂಧಿಯನು ಬಡಿದು ಮೈಗೆಲ್ಲ,
ವಿಷ ಶರ್ಪಹಿಡಿದು, ಕೊರಳಲ್ಲಿ ಸುತ್ತಿ ಕೊಂಡನು...
ಹಿಮಗಿರಿ ಏರಿ ಹಾಯಾಗಿ ಅಲ್ಲಿ ಕುಳಿತನು....
ಜಡೆಯಲ್ಲೆ ಕಟ್ಟಿದ ನದಿಯಾ | ತಲೆಯಲ್ಲೆ ಮುಡಿದಾ ಶಶಿಯಾ...(ಪ)
ಶಂಭೋ ಶಂಕರ ಮಹಾದೇವ, ಶಿವ ಶಂಭೋ ಶಂಕರ ಮಹಾದೇವ...
ವಿಷವನ್ನು ಕುಡಿದಾ ಒಮ್ಮೆ, ಯಮನನ್ನು ತಡೆದಾ ಒಮ್ಮೆ...ಏ..ಏ...
ವಿಷವನ್ನು ಕುಡಿದಾ ಒಮ್ಮೆ, ಯಮನನ್ನು ತಡೆದಾ ಒಮ್ಮೆ...
ಭಕ್ತಿಗೆ ಮೆಚ್ಚಿ ಮತ್ತೊಮ್ಮೆ | ಆತ್ಮಲಿಂಗವ, ಭಕ್ತನಿಗೆ ಕೊಟ್ಟ ದೇವನು..
ಬೇಕು ಎನ್ನೂ, ಕೈಲಾಸವನ್ನೇ ಕೊಡುವನು...
ಶಂಭೋ ಶಂಕರ ಮಹಾದೇವ, ಶಿವ ಶಂಭೋ ಶಂಕರ ಮಹಾದೇವ...
ಹೂವನ್ನು ಬೇಡೊದಿಲ್ಲಾ | ಹಣ್ಣನ್ನು ಕೇಳೊದಿಲ್ಲಾ...ಆ..ಓ...
ಹೂವನ್ನು ಬೇಡೊದಿಲ್ಲಾ | ಹಣ್ಣನ್ನು ಕೇಳೊದಿಲ್ಲಾ,
ಹೊಗಳಿಕೆಯನು ಎಂದೂ ಬಯಸಲ್ಲಾ, ನೀಲಕಂಠ....
ಹೂವಂತ ಹೃದಯ ಹುಡುಕುವ,
ಕಲ್ಲಾದ ಮನವ ಕಂಡಾಗ ಅಲ್ಲಿ ನಿಲ್ಲುವ...
ಶ್ರೀಕಂಠ, ಆನಂದವನ್ನು ನೀಡೂವ....
ಜಡೆಯಲ್ಲೆ ಕಟ್ಟಿದ ನದಿಯಾ | ತಲೆಯಲ್ಲೆ ಮುಡಿದಾ ಶಶಿಯಾ...(ಪ)
ಶಂಭೋ ಶಂಕರ ಮಹಾದೇವ, ಶಿವ ಶಂಭೋ ಶಂಕರ ಮಹಾದೇವ...
No comments:
Post a Comment