Monday, November 13, 2017

ಕನ್ನಡದ ಸಿದ್ಧ, ಹಾಡೋದಕ್ಕೆ ಎದ್ದ.. ಕನ್ನಡಕ್ಕೆ ಇವನು, ಸಾಯೋದಕ್ಕೂ ಸಿದ್ಧ..

ಚಿತ್ರ : ಮೋಜುಗಾರ..ಸೊಗಸುಗಾರ(1995)
ಸಾಹಿತ್ಯ : ಹಂಸಲೇಖ
ಗಾಯಕರು :ಡಾ|| ವಿಷ್ಣುವರ್ಧನ್

ಕನ್ನಡದ ಸಿದ್ಧ, ಹಾಡೋದಕ್ಕೆ ಎದ್ದ..
ಕನ್ನಡಕ್ಕೆ ಇವನು, ಸಾಯೋದಕ್ಕೂ ಸಿದ್ಧ..

ಕನ್ನಡವೇ ನಮ್ಮಮ್ಮ ಅವಳಿಗೆ ಕೈಮುಗಿಯಮ್ಮ
ಮಾತಾಡೋ ದೇವರಿವಳು, ನಮ್ಮ ಕಾಪಾಡೋ ಗುರು ಇವಳು
ಕನ್ನಡವೇ ನಮ್ಮಮ್ಮ ಅವಳಿಗೆ ಕೈಮುಗಿಯಮ್ಮ
ನಲಿದಾಡೋ ನೀರಿವಳು, ನಾ ಉಸಿರಾಡೋ ಕಾಡಿವಳು

ಬರೆಯೋರ ತವರೂರು..ನಡೆಯೋರ ಹಿರಿಯೂರು
ನಟಿಸೋರ ನವಿಲೂರು..ನುಡಿಸೋರ ಮೈಸೂರು
ಕೂಡಿದರೇ ಕಾಣುವುದು, ಎದೆಯೆಲ್ಲ ಹಾಡಾಗುವುದು
ಮಧುರ ಮಧುರಇದು.. ಅಮರ ಅಮರಇದು
ಕನ್ನಡವೇ ನಮ್ಮಮ್ಮ ಅವಳಿಗೆ ಕೈಮುಗಿಯಮ್ಮ
ಮಾತಾಡೋ ದೇವರಿವಳು, ನಮ್ಮ ಕಾಪಾಡೋ ಗುರು ಇವಳು

ಈ ಭಾಷೆ ಕಲಿಯೋದು, ಬೆಣ್ಣೆನ ತಿಂದಂತೆ
ನಮ್ಮ ಭಾಷೆ ಬರೆಯೋಕೆ, ಕಲಿಸೋರೆ ಬೇಡಂತೆ
ಹಾಡಿದರೆ ನುಲಿಯುವುದು, ಮೈತುಂಬಾ ಓಡಾಡುವುದು
ಸರಳ ಸರಳಇದು.. ವಿರಳ ವಿರಳಇದು

ಕನ್ನಡವೇ ನಮ್ಮಮ್ಮ ಅವಳಿಗೆ ಕೈಮುಗಿಯಮ್ಮ
ಮಾತಾಡೋ ದೇವರಿವಳು, ನಮ್ಮ ಕಾಪಾಡೋ ಗುರು ಇವಳು
ಕನ್ನಡವೇ ನಮ್ಮಮ್ಮ ಅವಳಿಗೆ ಕೈಮುಗಿಯಮ್ಮ
ನಲಿದಾಡೋ ನೀರಿವಳು, ನಾ ಉಸಿರಾಡೋ ಕಾಡಿವಳು

ಸಿದ್ಧವೋ, ಸಿದ್ಧವೋ ಕನ್ನಡಕ್ಕೆ ಸಾಯಲು..
ಸಿದ್ಧವೋ, ಬದ್ಧವೋ ಕನ್ನಡಕ್ಕೆ ಬಾಳಲು..


Thursday, November 2, 2017

ಹಾಯಾಗಿ ಕುಳಿತಿರು ನೀನು ರಾಣಿಯಹಾಗೆ...[ಹಾಲು ಜೇನು]

ಚಿತ್ರ: ಹಾಲು ಜೇನು...( ೧೬೮೨)
ಸಾಹಿತ್ಯ : ಸಾಹಿತ್ಯ ರತ್ನ "ಚಿ. ಉದಯಶಂಕರ್"...
ಗಾಯಕರು : ಗಾನ ಗಂಧರ್ವ "ಡಾ. ರಾಜಕುಮಾರ್"...
*******************************************
ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ, ಮಹಾರಾಣಿಯ ಹಾಗೆ...
ಆಯಾಸ ಪಡದಿರು ಇನ್ನು ಕೂಗುತಲೀಗೆ...
ಎಲ್ಲಾ ಕೆಲಸ ಮಾಡಿ ಮುಗಿಸುವೆ,
ನೀನೆ ಆಗ ಮೆಚ್ಚಿಕೊಳ್ಳುವೆ....
ಪಬಬಂ ಪಬಬಂ ಪಬಬಂ...

ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ, ಮಹಾರಾಣಿಯ ಹಾಗೆ....

ಭೀಮಸೇನ ನಳ ಮಹಾರಾಜರು ಗಂಡಸರಲ್ಲವೇ...
ಭೀಮಸೇನ ನಳ ಮಹಾರಾಜರು ಗಂಡಸರಲ್ಲವೇ...
ನನ್ನ ಹಾಗೆ ಮೀಸೆ ಹೊತ್ತ ಮಹನೀಯರಲ್ಲವೇ, ಮಹನೀಯರಲ್ಲವೇ....
ನೆನ್ನೆಯ ತನಕ ನೀನೆ ದುಡಿದೆ,
ಈ ಸಂಸಾರಕೆ ಜೀವ ತೈದೆ....
ಈ ದಿನವಾದರು ನಿನ್ನ, ಸೇವೆಯ ಮಾಡುವೆ ಚಿನ್ನ...
ಪಬಬಂ ಪಬಬಂ ಪಬಬಂ...‌

ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ, ಮಹಾರಾಣಿಯ ಹಾಗೆ...
ಆಯಾಸ ಪಡದಿರು ಇನ್ನು ಕೂಗುತಲೀಗೆ...
ಎಲ್ಲಾ ಕೆಲಸ ಮಾಡಿ ಮುಗಿಸುವೆ,
ನೀನೆ ಆಗ ಮೆಚ್ಚಿಕೊಳ್ಳುವೆ....
ತರರಂ ತರರಂ ತರರಂ...

ಚಿನ್ನದಂತ ಹೆಂಡತಿ ಇರಲು ಕಣ್ಣೀರೇತಕೆ...
ಚಿನ್ನದಂತ ಹೆಂಡತಿ ಇರಲು ಕಣ್ಣೀರೇತಕೆ...
ಮನಸನು ಅರಿತು ನೆಡೆಯುತಲಿರಲು,
ಚಿಂತೆಯ ಮಾತೇಕೆ...
ನೀ ನಗುತಿರಲು ನಮ್ಮೀ ಮನೆಗೆ ,
ಆ ಸ್ವರ್ಗವೇ ಜಾರಿದಂತೆ...
ಹೆಂಡತಿ ಸೇವಕಿಯಲ್ಲ, ಗಂಡನು ದೇವರು ಅಲ್ಲ...
ಪಬಬಂ ಪಬಬಂ ಪಬಬಂ....

ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ, ಮಹಾರಾಣಿಯ ಹಾಗೆ...
ಆಯಾಸ ಪಡದಿರು ಇನ್ನು ಕೂಗುತಲೀಗೆ...
ಎಲ್ಲಾ ಕೆಲಸ ಮಾಡಿ ಮುಗಿಸುವೆ,
ನೀನೆ ಆಗ ಮೆಚ್ಚಿಕೊಳ್ಳುವೆ...
ತರರಂ ತರರಂ ತರರಂ...

Wednesday, November 1, 2017

ಬೊಂಬೆ ಹೇಳುತೈತೆ.... (ರಾಜಕುಮಾರ್) ೨೦೧೭

ಚಿತ್ರ : ರಾಜಕುಮಾರ (2017)
ಸಾಹಿತ್ಯ : ಸಂತೋಷ ಆನಂದರಾಮ...
ಗಾಯಕರು : ವಿಜಯ ಪ್ರಕಾಶ...
------------------------------------------------------
ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೇ ರಾಜಕುಮಾರ (2)...

ಹೊಸಬೆಳಕೊಂದು ಹೊಸಿಲಿಗೆ ಬಂದು
ಬೆಳಗಿದೆ ಮನೆಯ ಮನಗಳ ಇಂದು
ಆರಾಧಿಸೋ ರಾರಾಧಿಸೋ ರಾಜರತ್ನನು
ಆಡಿಸಿಯೇ ನೋಡು
ಬೀಳಿಸಿಯೇ ನೋಡು
ಎಂದೂ ಸೋಲದು
ಸೋತು ತಲೆಯ ಬಾಗದು

ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೇ ರಾಜಕುಮಾರ ...

ಗುಡಿಸಲೆ ಆಗಲಿ ಅರಮನೆಯಾಗಲಿ
ಆಟವೆ ನಿಲ್ಲದು
ಎಂದೂ ಆಟ ನಿಲ್ಲದು
ಹಿರಿಯರೆ ಇರಲಿ ಕಿರಿಯರೆ ಬರಲಿ
ಭೇದವ ತೋರದು
ಎಂದೂ ಭೇದ ತೋರದು
ಎಲ್ಲ ಇದ್ದು ಏನೂ ಇಲ್ಲದ ಹಾಗೆ ಬದುಕಿರುವ
ಆಕಾಶ ನೋಡದ ಕೈಯೇ ನಿನದು ಪ್ರೀತಿ ಹಂಚಿರುವ
ಜೊತೆಗಿರು ನೀನು ಅಪ್ಪನ ಹಾಗೆ
ಹಣ್ಣೆಲೆ ಕಾಯೋ ವಿನಯದಿ ಹೀಗೇ
ನಿನ್ನನು ಪಡೆದ ನಾನು ಪುನೀತ
ಬಾಳು ನಗುನಗುತಾ

ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೇ ರಾಜಕುಮಾರ ...

ಮ್ ಮ್ ಮ್ ಮ್ .....

ತಾನೇ ಉರಿದು ಮನೆಗೆ ಬೆಳಕು ಕೊಡುವ ದೀಪವಿದು
ನಂದಾದೀಪವೇ ಇದು
ಆಡಿಸುವಾತನ ಕರುಣೆಯ ಮೇಲೆ ನಮ್ಮ ಪಾತ್ರವು
ಸಮಯದ ಸೂತ್ರ ಅವನದು
ಒಂದು ಮುತ್ತಿನ ಕಥೆಯ ಹೇಳಿತು ಹೀಗೊಂದೆ
ಆ ಕಥೆಯಲ್ಲಿದ್ದ ರಾಜನಂಗೆ ನೀನು ಬಂದೆ
ಯೋಗವು ಒಮ್ಮೆ ಬರುವುದು ನಮಗೆ
ಯೋಗ್ಯತೆ ಒಂದೆ ಉಳಿವುದು ಕೊನೆಗೆ
ಸೂರ್ಯನೊಬ್ಬ ಚಂದ್ರನೊಬ್ಬ ರಾಜನೂ ಒಬ್ಬ
ಈ ರಾಜನೂ ಒಬ್ಬ

ಆಡಿಸಿಯೇ ನೋಡು
ಬೀಳಿಸಿಯೇ ನೋಡು
ಎಂದೂ ಸೋಲದು
ಸೋತು ತಲೆಯ ಬಾಗದು...

ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೇ ರಾಜಕುಮಾರ ...