Thursday, August 18, 2016

ಕನ್ನಡ ನಾಡಿನ ವೀರರಮಣಿಯ, ಗಂಡು ಭೂಮಿಯ ವೀರ ನಾರಿಯ, ಚರಿತೆಯ ನಾನು ಹಾಡುವೆ...(ನಾಗರ ಹಾವು)

ಚಿತ್ರ: ನಾಗರಹಾವು...(1972)
ಸಾಹಿತ್ಯ: ಸಾಹಿತ್ಯರತ್ನ. ಚಿ॥ ಉದಯಶಂಕರ್....
ಗಾಯಕರು: ಡಾ॥ ಪಿ. ಬಿ. ಶ್ರೀನಿವಾಸ್...
------------------------------------------
ಕನ್ನಡ ನಾಡಿನ ವೀರರಮಣಿಯ,
ಗಂಡು ಭೂಮಿಯ ವೀರ ನಾರಿಯ,
ಚರಿತೆಯ ನಾನು ಹಾಡುವೆ...
ಕನ್ನಡ ನಾಡಿನ ವೀರರಮಣಿಯ,
ಗಂಡು ಭೂಮಿಯ ವೀರ ನಾರಿಯ,
ಚರಿತೆಯ ನಾನು ಹಾಡುವೆ...

ಚಿತ್ರದುರ್ಗದ ಕಲ್ಲಿನ ಕೋಟೆ,
ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ...
ಚಿತ್ರದುರ್ಗದ ಕಲ್ಲಿನ ಕೋಟೆ,
ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ...
ಮದಿಸಿದ ಕರಿಯ ಮದವಡಗಿಸಿದ,
ಮದಕರಿ ನಾಯಕರಾಳಿದ ಕೋಟೆ...
ಪುಣ್ಯ ಭೂಮಿಯು ಈ ಬೀಡು,
ಸಿದ್ದರು ಹರಸಿದ ಸಿರಿನಾಡು...

ಕನ್ನಡ ನಾಡಿನ ವೀರರಮಣಿಯ,
ಗಂಡು ಭೂಮಿಯ ವೀರ ನಾರಿಯ,
ಚರಿತೆಯ ನಾನು ಹಾಡುವೆ....

ವೀರಮದಕರಿ ಆಳುತಲಿರಲು,
ಹೈದಾರಾಲಿಯು ಯುಧ್ಧಕೆ ಬರಲು...
ಕೋಟೆ ಜನಗಳ ರಕ್ಷಿಸುತಿರಲು,
ಸತತ ದಾಳಿಯು ವ್ಯರ್ಥವಾಗಲು...
ವ್ಯೆರಿ ಚಿಂತೆಯಲಿ ಬಸವಳಿದ,
ದಾರಿಕಾಣದೆ ಮಂಕಾದ...

ಕನ್ನಡ ನಾಡಿನ ವೀರರಮಣಿಯ,
ಗಂಡು ಭೂಮಿಯ ವೀರ ನಾರಿಯ,
ಚರಿತೆಯ ನಾನು ಹಾಡುವೆ...

ಗೂಢಚಾರರು ಅಲೆದು ಬಂದರು,
ಹೈದಾರಾಲಿಗೆ ವಿಷಯ ತಂದರು...
ಚಿತ್ರದುರ್ಗದ ಕೋಟೆಯಲಿ,
ವಾಯುವ್ಯ ದಿಕ್ಕಿನೆಡೆ ನೋಡು ಎಂದರು...
ಕಳ್ಳಗಂಡಿಯ ತೋರಿದರು, ಲಗ್ಗೆ ಹತ್ತಲು ಹೇಳಿದರು....

ಕನ್ನಡ ನಾಡಿನ ವೀರರಮಣಿಯ,
ಗಂಡು ಭೂಮಿಯ ವೀರ ನಾರಿಯ,
ಚರಿತೆಯ ನಾನು ಹಾಡುವೆ...

( ಓ ಸರ್ದಾರ.......)

ಕೈಗೆ ಸಿಕ್ಕಿದ ಓನಕೆ ಹಿಡಿದಳು,
ವೀರ ಗಜ್ಜೇಯ ಹಾಕಿ ನಿಂದಳು...
ದುರ್ಗಿಯನ್ನು ಮನದಲ್ಲಿ ನೆನೆದಳು,
ಕಾಳಿಯಂತೆ ಬಲಿಗಾಗಿ ಕಾದಳು...
ಯಾರವಳು ಯಾರವಳು, ವೀರ ವನಿತೆ ಆ ಓಬವ್ವಾ...
ದುರ್ಗವು ಮರೆಯದ ಓಬವ್ವಾ....

ಕನ್ನಡ ನಾಡಿನ ವೀರರಮಣಿಯ,
ಗಂಡು ಭೂಮಿಯ ವೀರ ನಾರಿಯ,
ಚರಿತೆಯ ನಾನು ಹಾಡುವೆ...

ತೆವಳುತ ಒಳಗೆ ಬರುತಿದೆ ವೈರೀ,
ಓನಕೆಯ ಬೀಸಿ ಕೊಂದಳು ನಾರಿ...
ಸತ್ತವನನ್ನು ಎಳೆದು ಹಾಕುತಾ,
ಮತ್ತೇ ನಿಂತಳು ಹಲ್ಲು ಮಸೆಯುತಾ...
ವೈರಿ ರುಂಡ ಚೆಂಡಾಡಿದಳು,
ರಕುತದ ಕೋಡಿ ಹರಿಸಿದಳು....

ಕನ್ನಡ ನಾಡಿನ ವೀರರಮಣಿಯ,
ಗಂಡು ಭೂಮಿಯ ವೀರ ನಾರಿಯ,
ಚರಿತೆಯ ನಾನು ಹಾಡುವೆ...

ಸತಿಯ ಹುಡುಕುತ ಕಾವಲಿನವನು,
ಗುಪ್ತಧ್ವಾರದ ಬಳಿಗೆ ಬಂದನೂ....
ಮಾತು ಬರದೆ ಬೆಚ್ಚಿ ನಿಂತನೂ,
ಹೆಣದ ರಾಶಿಯ ಬಳಿಯ ಕಂಡನು....
ರಣಚಂಡಿ ಅವತಾರವನು,
ಕೋಟೆ ಸಲುಹಿದ ತಾಯಿಯನು...

( ಹೈದರಾಲಿಯ ಸೈನ್ಯ ನಮ್ಮ ಕೋಟೆಯನ್ನು ಮುತ್ತಿದೆ,
ಹೋಗಿ ರಣಕಹಳೆಯನ್ನು ಊದಿ...)

ರಣ ಕಹಳೆಯನು ಊದುತಲಿರಲೂ,
ಸಾಗರದಂತೆ ಸೈನ್ಯ ನುಗ್ಗಲೂ...
ವೈರಿಪಡೆಯು ನಿಷೇಶವಾಗಲೂ,
ಕಾಳಗದಲ್ಲಿ ಜಯವನು ತರಲೂ....
ಅಮರಳಾದಳು ಓಬವ್ವ.. ಅಮರಳಾದಳು ಓಬವ್ವ...

ತಂಗಿ ನಿನ್ನ ನಗುವಲೊಂದು ಪುಟ್ಟ ನಗುವಿದೆ....(ತವರಿಗೆ ಬಾ ತಂಗಿ)

ಚಿತ್ರ : ತವರಿಗೆ ಬಾ ತಂಗಿ (2002)
ಸಾಹಿತ್ಯ : "ನಾದಬ್ರಹ್ಮ" ಹಂಸಲೇಖ....♫♪♫
ಗಾಯಕರು : ಮಧು ಬಾಲಕೃಷ್ಣ...
----------------------------------------------------
ಬಾರಾ ಬಳೆಗಾರ, ತಾರಾ ಮಂಧಾರ, ಹೊಂಬಾಳೆ ತುಂಬ್ಯಾಳೆ...
ಹೊಂಬಾಳೆ ತುಂಬ್ಯಾಳೆ, ಹಸಿರು ಗಾಜು ಬಳೆಯ,
ತೊಡಿಸಿ ಹಾಡಿ ಹಸೆಯ....
****************************************************
ತಂಗಿ ನಿನ್ನ ನಗುವಲೊಂದು ಪುಟ್ಟ ನಗುವಿದೆ....
ಆ ನಗುವಿಗಾಗಿ ತವರು ಕಾದಿದೆ....
ತಂಗಿ ನಿನ್ನ ಕಣ್ಣಲೊಂದು ಪುಟ್ಟ ಕನಸಿದೆ....
ಆ ಕನಸಿಗಾಗಿ ತವರು ಕಾದಿದೆ....
ನೀನು ಆಡಿ ಬೆಳೆದಂಥ ತೊಟ್ಟಿಲಿಲ್ಲಿದೆ, ತೊಟ್ಟಿಲಿಲ್ಲಿದೆ...
ನಿನ್ನ ಮಗುವ ನಗುವಿನಾಟ ನೋಡೆ ಕಾದಿದೆ, ನೋಡೆ ಕಾದಿದೆ...
ಎಲ್ಲ ಜನುಮದಲ್ಲಿಯೂ, ನನ್ನ ತಂಗಿ ಆಗು ನೀ....ಈ...
ಈ ತವರು ಬೆಳಗಲು....

ತಂಗಿ ನಿನ್ನ ನಗುವಲೊಂದು ಪುಟ್ಟ ನಗುವಿದೆ....
ಆ ನಗುವಿಗಾಗಿ ತವರು ಕಾದಿದೆ....
---------------------------------------------------
ಅಕ್ಕ-ತಂಗಿಯ ಫಲ, ಮುದ್ದು ಗಂಗೆ ನಾರಿಯ ಫಲ,
ಹೆತ್ತು ತಾರೆ ಚೆದ್ದುಳ್ಳ ಚೆಲುವ ರಾಣಿಯ... ರಾಣಿಯ...
***************************************************
ಸಾವಿರ ನೋವಿರಲಿ, ಚೀರುವ ಚಿಂತಿರಲಿ...
ತವರೆ ಬೆಚ್ಚಗೆ, ಅವರೆ ಮೆಚ್ಚುಗೆ | ಮೊದಲ ಹೆರಿಗೆಗೆ...
ಈ ಸೀತಾಫಲ, ಈ ನಾರಿಫಲ....
ಸೋಕು ಮೆಲ್ಲಗೆ, ಇಂಥ ಕಂದನ | ತಾರೆ ಮಡಿಲಿಗೆ...
ನೀನು ಅತ್ತು ಕುಡಿದ ಬೆಳ್ಳಿ ಲೊಳ್ಳೆ ಇಲ್ಲಿದೆ, ಲೊಳ್ಳೆ ಇಲ್ಲಿದೆ...
ನಿನ್ನ ಮಗುವ ಹಸಿವಿನಳುವ ಕೇಳೆ ಕಾದಿದೆ, ಕೇಳೆ ಕಾದಿದೆ...
ಎಲ್ಲ ಜನುಮದಲ್ಲಿಯೂ, ನನ್ನ ತಂಗಿ ಆಗು ನೀ....ಈ...
ಈ ತವರು ಬೆಳಗಲು....

ತಂಗಿ ನಿನ್ನ ನಗುವಲೊಂದು ಪುಟ್ಟ ನಗುವಿದೆ....
ಆ ನಗುವಿಗಾಗಿ ತವರು ಕಾದಿದೆ....
--------------------------------------------------------
ಸೊಂಟಕ್ಕೆ ಬೆಳ್ಳಿ, ದಾರದ ಬೆಳ್ಳಿ ಮಾವ ನೀಡುವ....
ಹಾಲಿನ್ ಕಡಗ, ಹಾಲಿನ್ ಗೆಜ್ಜೇ ಮುಯ್ಯೀ ಮಾಡುವ...
ಶಿರದ ಮ್ಯಾಲೆ ನಿನ್ನ ತೊಟ್ಟಿಲ ಹೊತ್ತು ತಂದು ಕೊಡುವಾ....
*********************************************************
ಈ ಮಗುವಿಗೆ ನೆರಳಾಗುವ ಆ ತಂದೆಗೆ ಮನವು ಕರಗದೆ...
ಕಣ್ಣ ಕವಿದಿರೋ, ಗ್ರಹಣ ಕಳೆಯದೆ...
ಈ ಮಕ್ಕಳು ಸಂಧಾನದ ದೇವತೆಗಳು...
ಅಪ್ಪ ಎನ್ನುತ, ಅಮ್ಮ ಎನ್ನುತ, ತಂದು ಬೆಸೆವರು....
ಇನ್ನು ನಿನ್ನ ಬಾಳಿಗೆಂದು ದೃಷ್ಟಿಯಾಗದು, ವಿಘ್ನ ಬಾರದು...
ನಿನ್ನ ಮಗುವ ಪುಣ್ಯ ನಿನ್ನ ನೆತ್ತಿ ಕಾವುದು,
ಕುಂಕುಮಾ ನಗುವುದು...
ತಂಗಿ ನಿನ್ನ ಹೆಸರಲಿ, ನಿನ್ನ ಅಣ್ಣನುಸಿರಿದೇ...ಏ...
ಈ ತವರು ಬೆಳಗಲು....

ತಂಗಿ ನಿನ್ನ ಮಗುವಿನಲ್ಲೂ ಒಂದು ನಗುವಿದೆ...
ಆ ನಗುವು ನಮ್ಮ ಅಮ್ಮನಂತಿದೆ...
ತಂಗಿ ನಿನ್ನ ಮಗುವೇ ನಮ್ಮ ತಾಯಿ ಆಗಿದೆ...
ಈ ತವರ ಬಳ್ಳಿ ಕಲ್ಪವಾಗಿದೆ...
ನೀನು ಆಡಿ ಬೆಳೆದಂಥ ತೊಟ್ಟಿಲಿಲ್ಲಿದೆ, ತೊಟ್ಟಿಲಿಲ್ಲಿದೆ...
ನಿನ್ನ ಮಗುವ ನಗುವಿನಾಟ ನೋಡೆ ಕಾದಿದೆ, ನೋಡೆ ಕಾದಿದೆ...
ಎಲ್ಲ ಜನುಮದಲ್ಲಿಯೂ, ನನ್ನ ತಂಗಿ ಆಗು ನೀ....ಈ...
ಈ ತವರು ಬೆಳಗಲು....

ಈ ಲೋಕವೆಲ್ಲ ನೀನೆ ಇರುವ ಪೂಜಾ ಮಂದಿರ.... (ದೇವರು ಕೊಟ್ಟ ತಂಗಿ)

Wednesday, August 3, 2016

ಜಯ ಜನಾರ್ಧನ ಕೃಷ್ಣ ರಾಧಿಕಾಪತೇ,ಜನ ವಿಮೋಚನ ಕೃಷ್ಣ ಜನ್ಮ ಮೋಚನ...

ರಚನೆ : ಶ್ರೀ ಬ್ರಹ್ಮಾನಂದ ಗುರೂಜಿ...
ಗಾಯನ : ಕುಮಾರಿ: ಗೌತಮಿ ಮೂರ್ತಿ....
------------------------------------------------
ಜಯ ಜನಾರ್ಧನ ಕೃಷ್ಣ ರಾಧಿಕಾಪತೇ
ಜನ ವಿಮೋಚನ ಕೃಷ್ಣ ಜನ್ಮ ಮೋಚನ
ಗರುಡ ವಾಹನ ಕೃಷ್ಣ ಗೋಪಿಕಾ ಪತೇ
ನಯನ ಮೋಹನ ಕೃಷ್ಣ ನೀರಜೇಕ್ಷಣ

ಸುಜನ ಬಾಂಧವ ಕೃಷ್ಣ ಸುಂದರ ಕೃತೆ
ಮದನ ಕೋಮಲ ಕೃಷ್ಣ ಮಾಧವ ಹರೇ
ವಸುಮತಿ ಪತೇ ಕೃಷ್ಣ ವಾಸವಾನುಜ
ವರಗುಣಾಕರ ಕೃಷ್ಣ ವೈಷ್ಣವಾಕೃತೆ

ಸುರಚಿರಾನನ ಕೃಷ್ಣ ಶೌರ್ಯವಾರಿಧೆ
ಮುರಹರ ವಿಭೋ ಕೃಷ್ಣ ಮುಕ್ತಿದಾಯಕ
ವಿಮಲಪಾಲಕ ಕೃಷ್ಣ ವಲ್ಲಭಿಪತೆ
ಕಮಲಲೋಚನಾ ಕೃಷ್ಣ ಕಾಮ್ಯದಾಯಕ

ವಿಮಾಲಗಾತ್ರನೇ ಕೃಷ್ಣ ಭಕ್ತವತ್ಸಲ
ಚರಣ ಪಲ್ಲವಂ ಕೃಷ್ಣ ಕರುಣ ಕೋಮಲಮ್
ಕುವಲೈಕ್ಷಣ ಕೃಷ್ಣ ಕೋಮಲಾಕೃತೆ
ತವ ಪದಾಮ್ಬುಜಂ ಕೃಷ್ಣ ಶರಣಾಮಾಶ್ರಯೆ

ಭುವನ ನಾಯಕ ಕೃಷ್ಣ ಪಾವನಾಕೃತೆ
ಗುಣಗಣೋಜ್ವಲಾ ಕೃಷ್ಣ ನಳಿನಲೋಚನ 
ಪ್ರಣಯವಾರಿಧೆ ಕೃಷ್ಣ ಗುಣಗಣಾಕರ
ದಾಮಸೋದರ ಕೃಷ್ಣ ದೀನ ವತ್ಸಲ

ಕಾಮಸುಂದರ ಕೃಷ್ಣ ಪಾಹಿ ಸರ್ವಾದಾ
ನರಕನಾಶನ ಕೃಷ್ಣ ನರಸಹಾಯಕ
ದೇವಕಿಸುತ ಕೃಷ್ಣ ಕಾರುಣ್ಯಾಂಭುದೇ
ಕಂಸಾನಾಶನ ಕೃಷ್ಣ ದ್ವಾರಕಾಸ್ಥಿತ

ಪಾವನಾತ್ಮಕ ಕೃಷ್ಣ ದೇಹಿ ಮಂಗಳಂ
ತ್ವತ್ ಪದಾಮ್ಬುಜಂ ಕೃಷ್ಣ ಶ್ಯಾಮ ಕೋಮಲಮ್
ಭಕ್ತವತ್ಸಲ ಕೃಷ್ಣ ಕಾಮ್ಯದಾಯಕ
ಪಾಲಿಸೆನ್ನನೂ ಕೃಷ್ಣ ಶ್ರೀಹರಿ ನಮೋ

ಭಕ್ತದಾಸ ನಾ ಕೃಷ್ಣ ಹರಸು ನೀ ಸದಾ
ಕಾದು ನಿಂತೇನಾ ಕೃಷ್ಣ ಸಲಹೆಯಾ ವಿಭೋ
ಗರುಡ ವಾಹನ ಕೃಷ್ಣ ಗೋಪಿಕಾ ಪತೇ
ನಯನ ಮೋಹನ ಕೃಷ್ಣ ನೀರಜೇಕ್ಷಣ

ಹಾಕಿದ ಜನಿವಾರವಾ, ಸಧ್ಗುರುನಾಥ ಹಾಕಿದ ಜನಿವಾರವಾ....

Monday, August 1, 2016

ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ! ಕಂಡೆ ಪರಶಿವನ.....

ಕಂಡೆ ಪರಶಿವನಾ........!! (ಭಕ್ತಿ ಗೀತೆ)
ಗಾಯಕರು : ರಘು ಧಿಕ್ಷೀತ್....
------------------------------------------

ಹೇ! ಹುಟ್ಸಿದ್ಮ್ಯಾಗೇ ಹುಲ್ಲನ್ಯಾಕೇ, 
ತಿಂಬಾಕ್ಯಾಕೆ ಬಿಟ್ಟೋಯ್ತಾನೇ...
ಕಷ್ಟದ ಹಿಂದೆ ಸುಖವನಿಟ್ಟು, 
ಕಾಣದಂಗ ಕೊಟ್ಟ್ ನೋಡ್ತಾವ್ನೇ...
ಕ್ವಾರಣ್ಯಾನೇ ಕೈಯಾಗ ಹಿಡಿದು, 
ಕಾಣದಂಗ ಬಂದು ಕಾಪಾಡ್ತಾವ್ನೇ....
ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ ! 
ಕಂಡೆ ಪರಶಿವನ....!!
ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ ! 
ಕಂಡೆ ಪರಶಿವನ....ಹೇ!!

ಹೇ! ಕಲ್ಲು ಮುಳ್ಳಿನ ಹಾದಿಯಾಗೆ, 
ಜ್ವಾಪಾನ ಇದ್ರೂ ಸಿಕ್ಕೊಂಬಿದ್ರೇ...
ಇಲ್ಲಿ ಜಾರಿದ್ರೂ ಇನ್ನೊಂದ ಹೆಜ್ಜೇ, 
ಊರಂಗಿಲ್ಲಾ ಅನ್ನಂಗಾದ್ರೇ...
ಕ್ವಾರಣ್ಯಾನೇ ಕೈಯಾಗ ಹಿಡಿದು, 
ಕಾಣದಂಗ ಬಂದು ಕಾಪಾಡ್ತಾವ್ನೇ....
ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ ! 
ಕಂಡೆ ಪರಶಿವನ....!!
ಹೇ! ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ ! 
ಕಂಡೆ ಪರಶಿವನ....ಹೇ!!

ಓ! ಸಂಕಟಾ ಸಂಕಟಾ, ಜೀವನದ ಸಂಗಡ ಇಟ್ಟವ್ನೇ...
ಎಕ್ಡಾ ಚಮ್ಡಿ ಹರಿದು ದಮ್ಡಿಗಿಟ್ಸೊಡಂವ್ನೇ....
ಕೋಟಿ ಕೋಟಿ ಶೋದ್ನೇ ಬೆನ್ನಿಗೆ ಕಟ್ಟಿದ್ದವನೇ...
ಓ! ಕತ್ಲೇ ಕತ್ಲೇ ಜೀವನಾ ಪೂರ್ತಿ ಆದಾಗೇ....
ಆಕಾಶಾನೆ ಕಳಚಿ ತಲೆಮ್ಯಾಗೇ ಬಿದ್ಹಂಗೆ....
ಮುಗದೆ ಹೋಯ್ತು ಜೀವನಾ ಇನ್ನೂ ಬಾಳೋದ್ಯಾಕೇ..?
ಕತ್ಲಾಗಿಣ್ಕೋ ಬೆಳಕಿನ್ಹಂಗೇ, 
ಕಾಣದಂಗ ಬಂದು ಕಾಯೋನ ಅವ್ನೇ...
ಕ್ವಾರಣ್ಯಾನೇ ಕೈಯಾಗ ಹಿಡಿದು, 
ಮಾರವೇಷದಾಗ ಬಂದೋನ ಅವ್ನೇ...
ಕಷ್ಟಕ ಬಂದು ಕಾಪಾಡವ್ನು, ಏಳು ಮಲೇ ಮಾದಪ್ಪಾನೇ...
ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ ! 
ಕಂಡೆ ಪರಶಿವನ....!!
ಹೇ! ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ ! 
ಕಂಡೆ ಪರಶಿವನ....ಹೇ!!

ಓ! ಕಷ್ಟ ನಷ್ಟ ಸಂಕಟ ಶೋದ್ನೇ ಸಹಿಸೋರ್ಗೇ...
ಕೊಡ್ತಾನೋಡು ಹುಡ್ಕಿ ಹುಡ್ಕಿ ಒಳ್ಳೇವ್ರಿಗೆ...
ಪಾಪಾ ಮಾಡ್ದೋರ್ಗೇಲ್ಲಾ ಅವ್ನು ಖುಷಿ ಕೊಟ್ನೇ....
ಓ! ಎದ್ನೋ ಬಿದ್ನೋ ಬದುಕು ಬಾಳ್ವೇ ವ್ಯಾಪಾರ...
ಹಾಳಾಗ್ಹೋಗ್ಲಿ ಸಾಕಾಗ್ಹೋಯ್ತು ಸಂಸಾರ...
ಸಿಗದೆ ಹೋಯ್ತು ನೆಮ್ದಿ ತಾಳ್ಮೇ ಜೊತೆಗಿಟ್ನೇ...
ಹೇ! ಡಂಬಾಚಾರದ ಬಾಳ್ವೇ ನಡಸಿ, 
ಸೋತೊರ್ನೇದು ಕೈ ಹಿಡಿದವ್ನೇ....
ಕ್ವಾರಣ್ಯಾನೇ ಕೈಯಾಗ ಹಿಡಿದು, 
ಮಾರವೇಷದಾಗ ಬಂದೋನ ಅವ್ನೇ...
ಕಷ್ಟಕ ಬಂದು ಕಾಪಾಡವ್ನು, ಏಳು ಮಲೇ ಮಾದಪ್ಪಾನೇ...
ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ ! 
ಕಂಡೆ ಪರಶಿವನ....!!
ಹೇ! ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ ! 
ಕಂಡೆ ಪರಶಿವನ....!!
ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ ! 
ಕಂಡೆ ಪರಶಿವನ....!! ಓಹ್.....!!

ನೀನು ಬಂದ ಮೇಲೆ ತಾನೇ, ಇಷ್ಟು ಚೆಂದ ಈ ಬಾಳು.....(ಕೃಷ್ಣ)