Friday, December 1, 2017

ಸ್ನೇಹಕ್ಕೆ ಕೈಯ ಚಾಚು ಗೆಳೆಯ ಆಗ್ತಾನೇ... (ಅಂಜನಿ ಪುತ್ರ )

ಚಿತ್ರ : ಅಂಜನಿಪುತ್ರ...(2017)
ಸಾಹಿತ್ಯ : ಸುದೇಶ ಮಂಗಳೂರು...
ಗಾಯಕರು : ರಾಹುಲ್ ರೈ...
----------------------------------------------------------------
ಮಾರೂತ ರೂಪ ಓಂಕಾರ ತೇಜ, 
ವಿಜೇತೇಂದ್ರೀಯ ಶರಣಂ... ಶರಣಂ...
ಸುಗ್ರೀವ ಸಚಿವ ವೇದಾಂತ ವೇದಿ,
ಪ್ರಸನ್ನಾತ್ಮನೆ ಶರಣಂ... ಶರಣಂ...

ಸರ್ವತಂತ್ರಾಯ ವಾಗ ದೀಕ್ಷಾಯ,
ಲೋಕ ಪೂಜ್ಯಾಯ ಶರಣಂ... ಶರಣಂ‌‌...
ನಮೋ ನಮೋ ಮನೋಜವಂ,
ಅಂಜನಿ ಸುತನೆ ಶರಣಂ... ಶರಣಂ...

ಸ್ನೇಹಕ್ಕೆ ಕೈಯ ಚಾಚು, ಗೆಳೆಯ ಆಗ್ತಾನೆ...
ಪ್ರೀತಿಸೊ ಅಭಿಮಾನಿಗಳ, ಹಾರ್ಟಲ್ ಇಡ್ತಾನೆ...
ಧೈರ್ಯಕ್ಕೆ ಕೇಳ್ಳೆ ಬೇಡ, ರಾಮ ಧೂತನಿವನೆ...
ಊರೊಳಗಡೆ ಅಣಿಯ ಮಾಡ್ಕೊ,
ಅಪ್ಪು ಬರ್ತಾವ್ನೆ....

ಇವನೆ...ಇವನೆ...ರಾಜರತ್ನನಿವನೆ...
ಇವನೆ...ಇವನೆ...
ಕುಲ ಕೋಟಿ ಕನ್ನಡಿಗರೊಡೆಯನೆ... 
ಇವನೆ...ಇವನೆ...ಕಾಲನಾಥನಿವನೆ...
ಇವನೆ...ಇವನೆ...ಅಂಜನಿ ಪುತ್ರಾನೆ....

ಇವ ಅಂಜನಿ ಪುತ್ರ...ಇವ ಅಂಜನಿ ಪುತ್ರ...
ಇವ ಅಂಜನಿ ಪುತ್ರ...

ದುಷ್ಟರ ವಧೆಗೆ ಜೀವವ ತಳೆದ,
ಬಲ ಭೀಮನ ಮಿತ್ರ...
ಇವ ಅಂಜನಿ ಪುತ್ರ...ಇವ ಅಂಜನಿ ಪುತ್ರ...
ಇವ ಅಂಜನಿ ಪುತ್ರ...
ಸಿಡಿದೆದ್ರೆ ಮಾತ್ರ ಉಳ್ಸೋದೇ ಡೌಟು,
ನಿಲ್ಬೇಡಿ ಹತ್ರ...

ರಾಜ ಮಾರ್ಗದಲಿ ನೆಡಿತಾನೆ...
ಬೇಡಿ ಬಂದವರ ಕಾಯ್ತಾನೆ...
ಶಿಷ್ಟರ ರಕ್ಷಕೆ ಭುವಿಗಿಳಿದಿರುವ...
ಪವನ ಜರಸುತನೆ...

ಕ್ಷೀರ ಸಾಗರದ ಮನಸವನೆ...
ಕಷ್ಟಕೆ ಹೆಗಲು ನೀಡ್ತಾನೆ...
ಪ್ರೀತಿ ಪಾತ್ರರಿಗೆ ಹತ್ರಾನೆ...
ಇವ ನಕ್ಕರೆ ಸ್ವರ್ಗಾನೆ...

ಇವನೆ...ಇವನೆ... ದೀನ ಬಂಧು ಇವನೆ...
ಇವನೆ...ಇವನೆ..‌. ಕರುಣಾ ಸಿಂಧು ಇವನೆ...
ಇವನೆ... ಬಾ ಬೇಗ ಹರನೆ..‌.
ಇವನೆ...ಇವನೆ... ಅಂಜನಿ ಪುತ್ರಾನೆ...‌

ಬೆಟ್ಟಕು ಮಿಗಿಲಾಗಿರುವ, ಪ್ರೀತಿ ನಿಂದೇನೆ...
ಅಲೆದಷ್ಟು ಜಡಿಯಾಗಿರುವ,ಚಿನ್ನದ ಗುಣದವನೆ...
ಇತಿಹಾಸ ಕಾಯ್ತ ಐತೆ, ನಿನ್ನ ಹೆಜ್ಜೆಯನ್ನೆ...
ಈ ಮಣ್ಣಿನ ಹೆಮ್ಮೆ ನೀನೆ, Son Of "ಮುತ್ತು"ನೆ.....

ರಾಂಗು ರೂಟುಗಳ ಹೊಡಿತಾನೆ....
ಗದಾ ಬಾಹುವಿನ ಬಲದವನೆ....
ಕಣಕ್ಕೆ ಇಳಿದು ಯುದ್ಧಕೆ ನಿಂತರೆ,
ಮಹಾ ಧೂತನಿವನೆ...
ರಾಮ ಸ್ತೋತ್ರಗಳ ಕಲಿತವನೆ...
ಸತ್ಯ ನಿಲ್ಲೊಕಡೆ ಉಳಿತಾನೆ...
ದುಷ್ಟರ ಪ್ರಾಣವ ಅಂಗೈಲಿಡಿದು,
ಗಗನಕ್ಕೆ ಎಸಿತಾನೆ..‌. 

ಇವನೆ..‌.ಇವನೆ... ಮ್ರುತ್ಯುಂಜಯನಿವನೆ...
ಇವನೆ...ಇವನೆ... ವಜ್ರ ನಾಥನಿವನೆ...
ಇವನೆ...ಇವನೆ... ಕರುನಾಡ ಮನೆ ಮಗನೆ...
ಇವನೆ...ಇವನೆ... ಲೋಹಿತಾಷ್ವನಿವನೆ...

ಸ್ನೇಹಕ್ಕೆ ಕೈಯ ಚಾಚು, ಗೆಳೆಯ ಆಗ್ತಾನೆ...‌
ಪ್ರೀತಿಸೊ ಅಭಿಮಾನಿಗಳ, ಹಾರ್ಟಲ್ ಇಡ್ತಾನೆ...
ಧೈರ್ಯಕ್ಕೆ ಕೇಳ್ಳ ಬೇಡ, ರಾಮ ಧೂತನಿವನೆ...
ಕೈ ಕಟ್ಕೊಂಡ್ ಪಕ್ಕಕ್ ಸರ್ಕೊ, 
ಅಪ್ಪು ಬರ್ತಾವ್ನೆ...‌

ಇವನೆ...ಇವನೆ... ರಾಜರತ್ನನಿವನೆ...
ಇವನೆ...ಇವನೆ...
ಕುಲ ಕೋಟಿ ಕನ್ನಡಿಗರೊಡೆಯನೆ...
ಇವನೆ...ಇವನೆ... ಕಾಲನಾಥನಿವನೆ...
ಇವನೆ...ಇವನೆ..‌. ಅಂಜನಿ ಪುತ್ರಾನೆ...